ಗೋರಿಪರ್ತಿ ನರಸಿಂಹರಾಜು ಯಾದವ್ ಒಬ್ಬ ಭಾರತೀಯ ರೈತ, ಕೃಷಿ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನುಮಾಡಿದ್ದಾರೆ. ಇವರು ದಕ್ಷಿಣ ಭಾರತದ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗುಡೂರು ಗ್ರಾಮದವರು. ಪ್ರತಿ ಹೆಕ್ಟೇರ್‌ಗೆ 7.5 ರಿಂದ 8.3 ಟನ್‌ಗಳಷ್ಟು ಪೂಸಾ ಬಾಸ್ಮತಿ 1 ಟನ್ ಅಕ್ಕಿಯನ್ನು, ಹೆಕ್ಟೇರ್‌ಗೆ 3 ಟನ್ ಕರಿಬೇವು ಮತ್ತುಇತರೆ 4 ಟನ್‌ಗಳಷ್ಟು ಬೆಳೆಗಳನ್ನು ಬೆಳೆದು ದಾಖಲಿಸಿದ್ದಾರೆ ಇದು ವರದಿಯಾಗಿದೆ. ಅವರ ಜಮೀನಿನಲ್ಲಿ ಪ್ರತಿ ಹೆಕ್ಟೇರ್‌ಗೆ 5 ಟನ್‌ ಶೇಂಗಾ ಮತ್ತು ೧೦೦೦೦ ಕ್ಕೂ ಹೆಚ್ಚು ಕೊಂಬೆಗಳನ್ನು ಹೊಂದಿರುವ ಹಾರ್ಸ್‌ಗ್ರಾಮ್ ಬಳ್ಳಿಯನ್ನು ಬೆಳೆದಿದ್ದಾರೆ ಮತ್ತು ಅವರ ಜಮೀನಿನಲ್ಲಿರುವ ಒಂದು ಮಾವಿನ ಮರವು ಒಂದೇ ಋತುವಿನಲ್ಲಿ ೨೨೦೦೦ ಮಾವಿನ ಇಳುವರಿಯನ್ನು ನೀಡುತ್ತದೆ ಎಂದು ತಿಳಿದುಬಂದಿದೆ. ಅವರು ಭಾರತೀಯ ರೈಸ್ ಡೆವಲಪ್‌ಮೆಂಟ್ ಕೌನ್ಸಿಲ್ () ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ () ಯ ತಜ್ಞರ ಸಮಿತಿಗಳೊಂದಿಗೆ ಸದಸ್ಯರಾಗಿದ್ದಾರೆ ಮತ್ತು ಕೃಷಿ ರತ್ನ, , ಕೃಷಿ ಸಾಮ್ರಾಟ್ ಮತ್ತು ಜಗಜೀವನ್ ರಾಮ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್‌ನ ಕಿಸಾನ್ ಪುರಸ್ಕಾರ್ (1999) ಪಡೆದಿದ್ದಾರೆ. ಇವರು ಕೃಷಿಗೆ ನೀಡಿದ ಕೊಡುಗೆಗಳಿಗಾಗಿ ಭಾರತ ಸರ್ಕಾರವು ೨೦೦೯ ರಲ್ಲಿ ನಾಲ್ಕನೇಯ ಅತ್ಯುನ್ನತ ನಾಗರೀಕ ಗೌರವವಾದ ಪದ್ಮಶ್ರೀಯನ್ನು ನೀಡಿ ಗೌರವಿಸಿತು. == ಉಲ್ಲೇಖಗಳು ==